ದಯವಿಟ್ಟು ಈ ಒಂದು ಆಸೆ ಈಡೇರಿಸಿ ಎಂದು ಮಾಧ್ಯಮಗಳ ಮುಂದೆ ಮನವಿ ಮಾಡಿ ಕಣ್ಣೀರಾಕಿದ ಮುಖ್ಯ ಮಂತ್ರಿಯ ಸ್ವಂತ ಸೋದರಿ..!

ಜೀವನ ಎಂಬುದು ಒಂದು ರೀತಿಯ ನಿಲ್ಲದ ಪ್ರಯಾಣ. ಈ ಬದುಕಿನ ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ತಿರುಳು ಇರುತ್ತದೆ. ಯಾರು ಯಾವಾಗ ಏನು ಆಗುತ್ತಾರೆ ಎಂಬುದನ್ನು ನಿರೀಕ್ಷೆ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಅಂತೆಯೇ ಇತ್ತೀಚೆಗೆ ದೇಶಾದ್ಯಂತ ಭಾರಿ ಜನಪ್ರಿಯತೆ ಪಡೆದುಕೊಂಡು ದೇಶದ ದೊಡ್ಡ ರಾಜ್ಯ ಎನಿಸಿಕೊಂಡ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆಗಿರುವ ಯೋಗಿ ಆದಿತ್ಯಾ ನಾಥ್ ಅವರ ಜೀವನ ಪ್ರತಿಯೊಬ್ಬರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಹೌದು ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮೂಲಕ ಯೋಗಿ ಆದಿತ್ಯ ನಾಥ್ ಅವರು ಎರಡನೇ ಬಾರಿಗೆ ಮುಖ್ಯ ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಯೋಗಿ ಆದಿತ್ಯಾ ನಾಥ್ ಅವರಿಗೆ ಆರಂಭದಲ್ಲಿ ಅವರ ಮುಖ್ಯ ಮಂತ್ರಿ ಅವಧಿಯಲ್ಲಿ ಅನೇಕ ಆರೋಪಗಳು ಕೇಳಿ ಬರುತ್ತಿತ್ತು. ಇನ್ನೆನೋ ಕೆಲವು ತಿಂಗಳುಗಳು ಅಷ್ಟೇ ಯೋಗಿ ಅವರು ಮುಖ್ಯ ಮಂತ್ರಿ ಆಗಿರುತ್ತಾರೆ. ತದ ನಂತರ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದೇ ಹೇಳಲಾಗುತಿತ್ತು. ಆದರೆ ಇದೀಗ ವಿರೋಧಿಗಳ ಎಲ್ಲಾ ಕೊಂಕು ಮಾತುಗಳಿಗೆ ಉತ್ತರವಾಗಿ ಯೋಗಿ ಆದಿತ್ಯಾ ನಾಥ್ ಅವರು ಯಶಸ್ವಿಯಾಗಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನಡೆಸಿದ್ದು, ಮತ್ತೆ ಉತ್ತರ ಪ್ರದೇಶದ ಮತಭಾಂಧವರ ಆಶೀರ್ವಾದದಿಂದ ಎರಡನೇ ಬಾರಿಗೆ ಮುಖ್ಯ ಮಂತ್ರಿ ಗದ್ದುಗೆ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬಹುತೇಕ ಮಾಧ್ಯಮಗಳು ಯೋಗಿ ಆದಿತ್ಯ ನಾಥ್ ಅವರ ಜೀವನ ಚರಿತ್ರೆ ಕುರಿತು ಕಾರ್ಯಕ್ರಮ ಮಾಡುತ್ತಲೇ ಇದ್ದಾರೆ. ಅದರಂತೆ ಖಾಸಗಿ ವಾಹಿನಿಯೊಂದು ಯೋಗಿ ಆದಿತ್ಯ ನಾಥ್ ಅವರು ಹುಟ್ಟಿದ ಊರಿಗೆ ಭೇಟಿ ನೀಡಿದ್ದಾರೆ.

ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಎಂಬ ಗ್ರಾಮದಲ್ಲಿ ಯೋಗಿ ಆದಿತ್ಯ ನಾಥ್ ಅವರು ಜನ್ಮ ಪಡೆಯುತ್ತಾರೆ. ಇವರಿಗೆ ಒಬ್ಬ ಸೋದರಿ ಕೂಡ ಇದ್ದಾರೆ. ಅವರ ಹೆಸರು ಶಶಿ ಸಿಂಗ್. ಇವರನ್ನ ಭೇಟಿ ಮಾಡಿದ ಸುದ್ದಿ ವಾಹಿನಿಯ ವರದಿಗಾರ ತಮ್ಮ ಸೋದರನ ಯೋಗಿ ಅವರ ಬಗ್ಗೆ ಕೇಳುತ್ತಿದ್ದಂತೆ ಭಾವುಕರಾಗುತ್ತಾರೆ ಶಶಿ ಸಿಂಗ್. ಸೋದರಿ ಶಶಿ ಸಿಂಗ್ ತಿಳಿಸಿದಂತೆ ಯೋಗಿ ಆದಿತ್ಯ ನಾಥ್ ಅವರ ಮೊದಲ ಹೆಸರು ಅಜಯ್ ಸಿಂಗ್ ಬಿಷ್ಟ್ . ತನ್ನ 18 ನೇ ವಯಸ್ಸಿನಲ್ಲಿಯೇ ಕಾರಣಾಂತರಗಳಿಂದ ಮನೆಯನ್ನ ತೊರೆದ ಅಜಯ್ ಸಿಂಗ್ ಬಿಷ್ಟ್ ಮುಂದೆ ತಾನು ಸಂನ್ಯಾಸಿ ಆಗುತ್ತೇನೆ ಎಂದು ಊಹೆ ಕೂಡ ಮಾಡಿರಲಿಲ್ಲವಂತೆ. ಗೋರಖ್ ಪುರದ ಮಠವನ್ನು ಸೇರಿದ ನಂತರ ಅಜಯ್ ಸಿಂಗ್ ಎಂಬ ಹೆಸರನ್ನ ಯೋಗಿ ಆದಿತ್ಯಾ ಎಂದು ಮರು ನಾಮಕರಣ ಮಾಡಿಕೊಂಡಂರಂತೆ. ಬಳಿಕ ಮನೆಯವರ ಸಂಪರ್ಕ ಕಳೆದುಕೊಂಡು ಅಂತರ ಕಾಯ್ದುಕೊಂಡರಂತೆ ಯೋಗಿ ಆದಿತ್ಯಾ ನಾಥ್. ಇದೀಗ ಕಾವಿ ತೊಟ್ಟು ದೇಶದಾದ್ಯಂತ ಪ್ರಸಿದ್ದ ರಾಜಕಾರಣಿ ಆಗಿ ದೇಶದ ಗಮನ ಸೆಳೆದಿದ್ದಾರೆ.

ಇಷ್ಟಾದರೂ ಕೂಡ ತಾನು ಉನ್ನತ ಸ್ಥಾನ ಏನಾದರು ಕೂಡ ಯೋಗಿ ಆದಿತ್ಯಾ ನಾಥ್ ಅವರು ತಮ್ಮ ಕುಟುಂಬದವರನ್ನ ಭೇಟಿ ಮಾಡಿಲ್ಲವಂತೆ. ಸೋದರಿ ಶಶಿ ಸಿಂಗ್ ಅವರು ತಮ್ಮ ಊರಿನಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿದ್ದಾರೆ. ತನ್ನ ಸೋದರ ರಾಜ್ಯದ ಮುಖ್ಯ ಮಂತ್ರಿ ಆದರು ಕೂಡ ಶಶಿ ಸಿಂಗ್ ಅವರು ಮಾತ್ರ ಯಾರ ಅಂಗಿಲ್ಲದೆ ಸ್ವಾಭಿಮಾನದ ಬದುಕನ್ನ ನಡೆಸುತ್ತಿದ್ದಾರೆ. ವಯಸ್ಸಾದ ತಾಯಿ ಮಾತ್ರ ತನ್ನ ಮಗ ಯೋಗಿ ಆದಿತ್ಯಾ ನಾಥ್ ಅವರನ್ನ ನೋಡಬೇಕು ಎಂಬ ಹಂಬಲ ವ್ಯಕ್ತಪಡಿಸುತ್ತಿದ್ದಾರಂತೆ. ಆದರೆ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಯೋಗಿ ಅವರು ತಮ್ಮ ತಾಯಿ ನೋಡಲು ಹೋಗಿಲ್ಲವಂತೆ. ಈ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಯೋಗಿ ಆದಿತ್ಯ ನಾಥ್ ಅವರ ಸೋದರಿ ಶಶಿ ಸಿಂಗ್ ತನ್ನ ತಾಯಿಯನ್ನ ಯೋಗಿ ಅವರು ಒಮ್ಮೆ ನೋಡಲು ಬರುವಂತೆ ತಿಳಿಸಿ ಎಂದು ಮನವಿ ಮಾಡಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಅರ್ಚಕ ಮನೆತನದವರು ಹಾಗೂ ಪ್ರಧಾನ ಗುರುಗಳು ಮೊಬೈಲ್ ಸಂಖ್ಯೆ 9538866755 ಇವರು ದುರ್ಗಾ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538866755 ನಿಮ್ಮ ಸಮಸ್ಯೆಗಳಾದ ಅನಾರೋಗ್ಯ ಸಂಬಂಧಿಸಿದ ಸಮಸ್ಯೆಗಳು ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಂಜನಾ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕೂಡಲೇ ಕರೆ ಮಾಡಿ 9538866755.